ನಾ ಈಗ ಪ್ರಯಾಣ ಹೊರಟಿರುವ ಸ್ಥಳದ ಇತಿಹಾಸದ ಬಗ್ಗೆ ನನಗೆ ಸ್ವಲ್ಪವೂ ಮಾಹಿತಿ ಇಲ್ಲ ,ನಿಜ ಹೇಳಬೇಕು ಎಂದರೆ ಇಂತಹ ಪ್ರವಾಸಿ ಸ್ಥಳ ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೆ ಎಂದು ಗೊತ್ತೇ ಇರಲಿಲ್ಲ ನನಗೆ . ಹೀಗೆ ಒಂದು ದಿನ ಬೈಕ್ ಹತ್ತಿ ನಾವು ಶರಾವತಿ ತೂಗುಸೇತುವೆಯ ಕಡೆಗೆ ಹೊರಟೆವು .ನಂತರ ಅಲ್ಲಿಂದ ಮುಂದೆ ಒಂದು ಬಸದಿ ಇದೆ ,ತುಂಬಾ ಹಳೆ ಕಾಲದ ಬಸದಿ ಎನ್ನುವ ವಿಷಯ ನಮಗೆ ಗೊತ್ತಾಯ್ತು.
![](http://sanchaarimitra.com/wp-content/uploads/2022/10/IMG_2041-768x1024.jpeg)
ಹೀಗೆ ಶುರುವಾಗಿದ್ದ ಪ್ರಯಾಣ ಕೊನೆಗೆ ಗೇರುಸೊಪ್ಪದ ಚತುರ್ಮುಖ ಜೈನ ಬಸದಿಯ ವರೆಗೆ ತಲುಪಿತು.ಶರಾವತಿ ತೂಗುಸೇತುವೆಯನ್ನು ದಾಟಿ ಯಾವುದೊ ರೋಡ್ ಅಲ್ಲಿ ಹೊಕ್ಕಿ ಎಲ್ಲೊ ಹೊರಬಿದ್ದು ನಾವು ಕೊನೆಗೆ ತಲುಪಿದ್ದು ಹೊನ್ನಾವರ -ಗೇರುಸೊಪ್ಪದ ಅರಣ್ಯ ವಿಭಾಗದ ಕರ್ನಲ್ ಪೀಟನ್ ಪ್ಲಾಟ್ ಹತ್ತಿರ .
![](http://sanchaarimitra.com/wp-content/uploads/2022/10/IMG_1993-768x1024.jpeg)
ಅಂದರೆ ನನಗೆ ಅಲ್ಲಿ ಕಂಡುಬಂದ ಬೋರ್ಡ್ ಅದು .ನಾವೇನು ಅವರ ಪ್ಲಾಟ್ ಹೊಕ್ಕಿಲ್ಲ ಬಿಡಿ .ಅದಕ್ಕೂ ಮುಂಚೆ ಶರಾವತಿ ನದಿಗೆ ಸಂಬಂದಿಸಿದ ಹಳ್ಳ ದಾಟುವ ಸಾಹಸವೆಲ್ಲ ಮಾಡಿದ್ದೇವೆ .ಆದರೆ ನೀವೇನಾದರೂ ಹಳ್ಳದ ಆಚೆ ಹೋಗಬೇಕೆಂದರೆ ಇನ್ನೊಂದು ಹಳೆಯ ತೂಗುಸೇತುವೆ ಇದೆ . ಈತರದ ಸಾಹಸ ಬೇಕೆಂದೇನಿಲ್ಲ .ನನಗೆ ಆ ಚಿಕ್ಕ ತೂಗು ಸೇತುವೆಯ ಬಗ್ಗೆ ತಿಳಿದದ್ದು ಹಳ್ಳ ದಾಟಿ ಆದ ಮೇಲೆ . ನಮ್ಮ ಬೈಕ್ ಪ್ರಯಾಣ ಈ ಹಳ್ಳದ ವರೆಗೆ ಕೊನೆಗೊಳ್ಳುತ್ತದೆ .ನಂತ್ರ ನಡೆದುಕೊಂಡೇ ಹೋಗ್ಬೇಕು .ನನ್ನ ಎಲ್ಲ ಹಳೆಯ ಪ್ರಯಾಣದ ತರ ಕಾಡಿನ ಮಾರ್ಗ ಇಲ್ಲೂ ಕೂಡ ಸಾಮಾನ್ಯ . ಆ ಕಾಡಿನ ಪಕ್ಷಿ ಪ್ರಾಣಿಗಳ ಸದ್ದು ಕೇಳುತ್ತ ನಮ್ಮ ಪ್ರಯಾಣ ಮುಂದುವರೆಯಿತು .ಅಲ್ಲೇ ನನಗೆ ಕಂಡು ಬಂದಿದ್ದು ಈ ಕರ್ನೆಲ್ ಪೀಟನ್ ಪ್ಲಾಟ್ ಅನ್ನೋ ಬೋರ್ಡ್ .ಹಾಗೆ ಮುಂದಕ್ಕೆ ಸ್ವಲ್ಪ ನಡೆದುಕೊಂಡು ಹೋದಾಗ ಒಂದು ಅದ್ಬುತ ಸ್ಥಳ ನಮ್ಮ ಕಣ್ಮುಂದೆ .ಅದೇ ಚತುರ್ಮುಖ ಜೈನ ಬಸದಿ .
![](http://sanchaarimitra.com/wp-content/uploads/2022/10/IMG_2035-1024x768.jpeg)
ನನಗೆ ನಿಜವಾಗಿಯೂ ಆ ಸ್ಥಳದ ಬಗ್ಗೆ ಏನು ಹೇಳಬೇಕೆಂದು ಗೊತ್ತಾಗುತ್ತಿಲ್ಲ .ಅಲ್ಲಿ ನೀವು ಹೋದರೆ ಮಾತ್ರ ಆ ಸ್ಥಳ ಪರಿಚಯ ಮತ್ತು ಅದರ ವೈಶಿಷ್ಟತೆ ತಿಳಿಯಲು ಸಾಧ್ಯ .ಆ. ಹಳೆ ಕಾಲದ ಕಂಬಗಳು ಜೈನ ಶಿಲ್ಪಗಳು ಎಲ್ಲವೂ ಅದ್ಬುತ .ಹಾಗೆ ಅಲ್ಲಿ ನಿಮಗೆ ಪ್ರಾಚೀನ ಲಿಪಿಯ ಪರಿಚಯವೂ ಆಗುತ್ತದೆ .ನಾನು ಸುಮ್ಮನೆ ಆ ಪ್ರಾಚೀನ ಲಿಪಿಯ ಕಂಬದ ಮೇಲೆ ಹಾಗೆ ಕೈ ಆಡಿಸಿದಾಗ ನನಗಂತೂ ಎನ್ನೋ ಒಂತರ ವಿಚಿತ್ರ ಅನುಭವ ಆಯ್ತು .ಆತರ ಲಿಪಿಯ ಕೆತ್ತನೆ ಮನಮೋಹಕ .
ಹಾಗೆ ಪಕ್ಕದಿಂದ ಮುಂದಕ್ಕೆ ನಡೆದರೆ ನಿಮಗೆ ಚತುರ್ಮುಖ ಬಸದಿಯ ಮಹಾದ್ವಾರ ನೋಡಸಿಗುತ್ತದೆ . ಯಾವ ಶಿಲ್ಪಿ ಈ ಬಸದಿಯನ್ನು ನಿರ್ಮಿಸಿದರೋ ಅವರ ಕಾರ್ಯ ಚಾತುರ್ಯವನ್ನು ಮೆಚ್ಚಲೇಬೇಕು .ಯಾವ ದಿಕ್ಕಿನಲ್ಲೇ ಹೋದರು ಒಂದೇ ಸಮನಾದ ವಿನ್ಯಾಸ . ಹೆಸರಿಗೆ ತಕ್ಕಂತೆ ಚತುರ್ಮುಖ ಬಸದಿಯೇ ಸರಿ . ಒಳಗಿನ ಕಂಬಗಳ ಕೆತ್ತನೆ ಇವೆಲ್ಲವೂ ಈಗಿನ ಯಾವುದೇ ಆದುನಿಕ ಯಂತ್ರಕ್ಕೂ ಕಮ್ಮಿ ಇಲ್ಲ .ಹಾಗೆ ಇದೆ .ಆ ಚಿಕ್ಕ ಬಾಗಿಲುಗಳು ,ದೇವರ ಮೂರ್ತಿಗಳು ಎಲ್ಲವೂ ನಮಗೆ ಹಿಂದಿನ ಕಾಲದ ಕಲಾ ಸಮೃದ್ಧಿಯನ್ನು ಪರಿಚಯಿಸುತ್ತದೆ . ಆತರ ಇದೆ ಈ ಬಸದಿಯ ಹಿರಿಮೆ ಗರಿಮೆ .ಅತ್ಯದ್ಭುತ . ಹೇಳ ಹೊರಟರೆ ತುಂಬಾ ಇದೆ ,ಅದಕ್ಕಿಂತ ಖುದ್ದಾಗಿ ಈ ಸ್ಥಳಕ್ಕೆ ಬೆಟ್ಟಿಕೊಟ್ಟು ನಮ್ಮ ಪ್ರಾಚೀನ ಸಂಸ್ಕ್ರತಿಯ ಮನವರಿಕೆ ಮಾಡಿಕೊಳ್ಳುವದರಲ್ಲಿ ಇನ್ನು ತುಂಬಾ ಹಿತವಿದೆ .
![](http://sanchaarimitra.com/wp-content/uploads/2022/10/IMG_2044-768x1024.jpeg)
ನೀವೇನಾದರೂ ಚತುರ್ಮುಖ ಬಸದಿಗೆ ನೇರವಾಗಿ ಕಾರ್ ಅಥವಾ ಬೈಕ್ ಮೂಲಕ ತಲುಪಲು ಇಷ್ಟ ಪಟ್ಟರೆ ಇನ್ನೊಂದು ದಾರಿ ಕೂಡ ಇದೆ . ನಾನು ಮಾಡಿದ ಹಾಗೆ ಹಳ್ಳ ಕೊಳ್ಳ ದಾಟುವ ಅವಶ್ಯಕತೆಯೂ ಇಲ್ಲ .ಆ ಮಾರ್ಗ ನಮಗೆ ಸ್ವಲ್ಪ ದೂರ ಆದ್ದರಿಂದ ನಮ್ಮ ಹಳ್ಳ ದಾಟುವ ಸಾಹಸಕ್ಕೆ ಅರ್ಥವಿದೆ ಅಂತ ನಾನು ಭಾವಿಸುತ್ತೇನೆ .ಅದಲ್ಲದೆ ಪಕೃತಿಯ ನಡುವೆ ಒಂದಲ್ಲ ಒಂದು ಆಶ್ಚರ್ಯಕರವಾದ ಘಟನೆಗಳು ನಡೆಯುತ್ತಾ ಇರುತ್ತವೆ .ಹಾಗೆ ನನಗು ಒಂದು ವಿಶಿಷ್ಟ ಜಾತಿಯ ಅಳಿಲು ನೋಡುವ ಅದೃಷ್ಟ ಸಿಕ್ಕಿತು ಆದಿನ.
ಇಂತಹ ಪ್ರಾಚೀನ ಅದ್ಬುತ ಪ್ರವಾಸಿ ಸ್ಥಳಗಳನ್ನು ಒಳಗೊಂಡಿರುವ ಈ ನಾಡಿನಲ್ಲಿ ಹುಟ್ಟಿರುವ ನಾವೇ ಧನ್ಯರು .ಸಮಯ ಸಿಕ್ಕಾಗ ಇಂತಹ ಪ್ರವಾಸಿ ಸ್ಥಳಗಳಿಗೆ ನೀವು ಬೆಟ್ಟಿ ನೀಡಬೇಕೆಂದು ಈ ಬರಹದ ಮೂಲಕ ಸಣ್ಣ ಕೋರಿಕೆ .
ನಿಮ್ಮ ಸಂಚಾರಿ ಮಿತ್ರ.
Click Here for more Pics : ಚತುರ್ಮುಖ ಜೈನ ಬಸದಿ ( Chaturmukha Jaina Basadi ) Photo Gallery.