ಜೀವನದಿ ಅಘನಾಶಿನಿ ( Aghanashini ) .

ಶಿರಸಿ ನಗರದ ಹೆಸರನ್ನು ಕೇಳದವರೇ ವಿರಳ . ಕರ್ನಾಟಕದ ಅತಿದೊಡ್ಡ ಜಾತ್ರೆಯಲ್ಲಿ ಶಿರಸಿಯ ಸಿರಿದೇವಿ ಮಾರಿಕಾಂಬೆಯ ಜಾತ್ರೆಯು ಒಂದು. ನಾನೀಗ ಹೇಳಹೊರಟಿರುವದು ಜಾತ್ರೆಯ ಬಗ್ಗೆ ಅಲ್ಲ.ಆದರೆ ಶಿರ್ಶಿ ನಗರದ ಶಂಕರ ಹೊಂಡವನ್ನ ತನ್ನ ತವರು ಮನೆಯಾಗಿ ಮಾಡಿಕೊಂಡ ನನ್ನೂರ ಜೀವನದಿ ಅಘನಾಶಿನಿಯ ಬಗ್ಗೆ.

ಶಂಕರ ಹೊಂಡ ಎಂಬ ಕೆರೆಯಿಂದ ಉದ್ಭವವಾಗಿ ಹರಿಯುತ್ತ ತನ್ನೊಂದಿಗೆ ಸಣ್ಣ ಪುಟ್ಟ ಝರಿ ಹಳ್ಳಗಳೊಂದಿಗೆ ಮೈದುಂಭಿಕೊಳ್ಳುತ್ತ ಮಲೆನಾಡಿನ ಧಟ್ಟ ಅರಣ್ಯಗಳಲ್ಲಿ ಬಳಕುತ್ತಾ ಹೆಬ್ಬಂಡೆಗಳ ಮದ್ಯೆ ನೊರೆಕಾರಿ ಭೋಗರೆಯುತ್ತ ಸಾಗುವ ಈ ನದಿ ತನ್ನ ದಂಡೆಗುಂಟ ಕೋಟ್ಯಂತರ ಜೀವಿಗಳ ತಾಯಿಯಾಗಿದ್ದಾಳೆ . ನೂರಾರು ಬಗೆಯ ಔಷದ ಸಸ್ಯಗಳು ,ಅಪರೂಪದ ಸಸ್ಯ ಸಂಕುಲ ಇವಳ ಮಡಿಲಲ್ಲಿವೆ . ಇವಳು ಸಾಗುವ ದಟ್ಟಾರಣ್ಯಗಳಲ್ಲಿ ಅಪರೂಪದ ಪ್ರಾಣಿ ಸಂಕುಲ ,ಪಕ್ಷಿಗಳು ಇವೆ . ಸಿಂಹದ ಬಾಲದ ಸಿಂಗಳೀಕ ಕಪ್ಪು ಚಿರತೆ ಇಂತಹ ಜೀವಿಗಳನ್ನು ಇಲ್ಲಿ ಮಾತ್ರ ನೋಡಬಹುದು .

ಬಿರಿ ಬೇಸಿಗೆಯಲ್ಲಿ ಕೃಶಕಾಯವಾಗುವ ಈ ನದಿ ಮಳೆಗಾಲದಲ್ಲಿ ಸೊಕ್ಕಿ ಉಕ್ಕಿ ಮೈದುಂಬಿ ಹರಿಯುತ್ತದೆ . ಈ ಸಮಯದಲ್ಲಿ ನದಿಯ ದಂಡೆಯಲ್ಲಿ ಬರುವ ಊರುಗಳಾದ ದಿವಗಿ , ಹೆಗಡೆ,ಮಿರ್ಜಾನ ,ಮಾಸೂರು ಗಳಲ್ಲಿ ಹೊಲ ಮನೆಗಳಿಗೆ ನೀರು ನುಗ್ಗುವದು ಉಂಟು.

Click Here for more Pics : ಅಘನಾಶಿನಿ ( Aghanashini ) Photo Gallery .

ಅಘನಾಶಿನಿ ಕೇವಲ ನದಿಯಲ್ಲ . ಇಲ್ಲಿನ ಜನರ ಬದುಕು . ತನ್ನೊಡಲಲ್ಲಿ ನೂರಾರು ಬಗೆಯ ಮೀನುಗಳು ,ರುಚಿಯಾದ ಶಿಗಡಿ , ಬೆಳಚುಗಳಿಂದಾಗಿ ಇಲ್ಲಿನ ಬೆಸ್ತರಿಗೆ ತುತ್ತಿನ ಚೀಲ ತುಂಬುವ ದಾರಿಯಾಗಿದ್ದಾಳೆ . ರೈತರಿಗೆ ಅನ್ನಪೂರ್ಣೆಯಾಗಿ ಬೆಳೆಗಳಿಗೆ ನೀರೊದಗಿಸುತ್ತಿದ್ದಾಳೆ . ಹರಿಯುತ್ತ ಹರಿಯುತ್ತ ಎರಡು ಕವಲಾಗಿ ಹರಿದು ಐಗಳ ಕೂರ್ವೆ ಎಂಬ ಊರನ್ನು ದ್ವೀಪವಾಗಿಸುವ ಈ ನದಿ ದಂಡೆಯಲ್ಲಿ ತನ್ನ ನಂಬಿರುವ ಸಾವಿರಾರು ಭಕ್ತರ ಪಾಲಿನ ಜೀವಂತ ದೈವ ಪ್ರಸಿದ್ಧ ಬಬ್ರು ಲಿಂಗೇಶ್ವರ ದೇವಸ್ಥಾನವಿದೆ . ಇಲ್ಲಿನ ಕಾಂಡ್ಲಾ ಸಸ್ಯಪ್ರದೇಶ ವಿವಿಧ ಬಗೆಯ ಕೊಕ್ಕರೆ ಗಿಡುಗ ಮುಂತಾದ ಪಕ್ಷಿಗಳ ಆಶ್ರಯಧಾಮವಾಗಿದೆ . ವಿದೇಶಗಳಿಂದಲೂ ಇಲ್ಲಿಗೆ ಕಪ್ಪುತಲೆಯ ದೊಡ್ಡಗಾತ್ರದ ಕೊಕ್ಕರೆಗಳು ಬರುತ್ತವೆ . ಇಲ್ಲಿಂದ ಮಂದಗಮನೆಯಾಗಿ ಮುಂದೆಸಾಗುವ ಅಘನಾಶಿನಿ ತದಡಿ ಬಳಿ ಸಮುದ್ರ ಸೇರಿ ಕೊಳ್ಳುತ್ತಾಳೆ . ಇದರಿಂದಾಗಿ ತದಡಿ ಮೀನುಗಾರಿಕಾ ಬಂದರಾಗಿ ಹೊರಹೊಮ್ಮಿದೆ. ಕುಮಟಾ ಹೊನ್ನಾವರ ಜನರ ದಾಹ ತಣಿಸುವ ಜೀವ ಜಲವಾದ ಈ ನನ್ನೂರಿನ ನದಿ ಅಘನಾಶಿಗೆ ಕೋಟಿ ಕೋಟಿ ಪ್ರಣಾಮ.

ಸಂಚಾರಿ ಮಿತ್ರ.

2 Replies to “ಜೀವನದಿ ಅಘನಾಶಿನಿ ( Aghanashini ) .”

  1. Nanna uru aghanashini… Nanna hemme….. Aghanashini belachu kallu alivina anchannu seriruvudu besarada vichara… E aghnashini yannu hige prakrutiya madilalli swatantra vagi bittare… Ade kushiyada vichara….

Leave a Reply

Your email address will not be published.